ಯಲ್ಲಲಿಂಗ ಕ್ರಿಯೇಷನ್ಸ್ ಲಾಂಛನದಲ್ಲಿ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸಹಕಾರದೊಂದಿಗೆ ಶ್ರೀಮತಿ ರೇವತಿ ನಿರ್ಮಿಸುತ್ತಿರುವ ಒರಟ ಪ್ರಶಾಂತ್ ನಾಯಕನಾಗಿ ಅಭಿನಯಿಸುತ್ತಿರುವ ತಾಂಡವ ಚಿತ್ರದ ಹಾಡುಗಳ ಧ್ವನಿಮುದ್ರಣ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನದಲ್ಲಿ ಏನೋ ಮನಸಲಿ ಏನೋ ಆಸೆ ತಂದೆ ನೀನು ಎಂಬ ಹಾಡಿಗೆ ಕಳೆದ ವಾರ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನೆರವೇರಿತು. ನಟ ಶಿವರಾಜ್ಕುಮಾರ್, ಸಚಿವ, ವಿ.ಸೋಮಣ್ಣ ಶಾಸಕ, ಬಿ.ಪಿ.ಹರೀಶ್, ಹೆಚ್.ರವೀಂದ್ರ, ನಿರ್ಮಾಪಕ ನೆ.ಲ.ಗಿರಿಧರ ಆಗಮಿಸಿ ತಾಂಡವನಿಗೆ ಶುಭ ಹಾರೈಸಿದರು.
ಶಿವಾನಿ ಮಿಂಚು ಚಿತ್ರಗಳನ್ನು ನಿರ್ದೇಶಿಸಿದ್ದ ವಿಶಾಲ್ರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಲಿಯಂ ಛಾಯಾಗ್ರಹಣ, ಸಂಜೀವರೆಡ್ಡಿ ಕಥೆ, ಚಿತ್ರಕಥೆ, ಸಂಭಾಷಣೆ, ರಾಮ್ನಾರಾಯಣ್, ಗೌಸ್ಪೀರ್ ಸಾಹಿತ್ಯ, ಸೂರ್ಯಪ್ರಕಾಶ್ ಸಾಹಸ, ಚಾಮರಾಜ್ ನೃತ್ಯ ನಿರ್ದೇಶನ, ಸಿ.ರವಿಚಂದ್ರ, ಕಿರಣ್ ಕುಮಾರ್ ಸಂಕಲನ, ಎಂ.ಕಿರಣ್, ಗುರುದತ್ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದು ಉಳಿದ ತಾರಾಗಣದಲ್ಲಿ ಚರಣ್ರಾಜ್, ಅರವಿಂದ್, ವಿನಯಪ್ರಕಾಶ್ ಹಾಗೂ ಆದರ್ಶ ಫಿಲಂಸ್ ಇನ್ಸಿಟಿಟ್ಯೂಟ್ನ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ.